ನಮ್ಮ ಮಕ್ಕಳಿಗೆ ನಾವು ಕಲಿಸಲೇ ಬೇಕಾದ್ದು ವಿದ್ಯಾಧಿದೇವತೆ ಸರಸ್ವತೀ ದೇವಿಗೆ ಭಕ್ತಿ ಪೂರ್ವಕ ನಮನ ಸಲ್ಲಿಸುವ ಈ ಪುಟ್ಟ ಶ್ಲೋಕ ಸರಸ್ವತಿ ನಮಸ್ತುಭ್ಯಂ ವರದೇ ಕಾಮ ರೂಪಿಣಿ , ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ .(ಅರ್ಥ : ವಿದ್ಯಾದಿ ದೇವತೆಯಾದ ಸರಸ್ವತೀ ಮಾತೆಯೇ ನಿನಗಿದೋ ನನ್ನ ಸಾಷ್ಟಾಂಗ ನಮಸ್ಕಾರ . ನೀನು ಇಷ್ಟಾರ್ಥವನ್ನೆಲ್ಲಾ ಕರುಣಿಸುವ ಮಹಾತಾಯಿ ,ನಾನೀಗ ವಿದ್ಯಾರ್ಜನೆಯನ್ನು ಆರಂಬಿಸುತ್ತಿದ್ದೇನೆ . ಆದ್ದರಿಂದ ನನಗಿನ್ನು ಸದಾಕಾಲ ನಿನ್ನ ಅರ್ಶಿರ್ವಾದ ಕರುಣಿಸು , ನನಗೆ ವಿದ್ಯಾಬ್ಯಾಸ ಸಂಪೂರ್ಣ ಸಿದ್ದಿಸುವಂತಹ ವರವನ್ನು ನೀಡು, ವಿದ್ಯೆ ಮತ್ತು ಬುದ್ದಿಯನ್ನು ದಯಾಪಾಲಿಸು .)
ತಾತ್ಪರ್ಯ : ನಮ್ಮ ಮಕ್ಕಳು ಪ್ರತಿ ದಿನವೂ ಬೆಳಗಿನ ಜಾವವೇ ಹಾಸಿಗೆ ಬಿಟ್ಟೆದ್ದು , ಶೌಚ ವಿಧಿ ಮುಗಿಸಿ,ಹಲ್ಲುಜ್ಜಿ, ಮುಖತೊಳೆದು, ಸರಸ್ವತಿಗೆ, ತಾಯಿ-ತಂದೆಗೆ ನಮಸ್ಕರಿಸಿ ವಿದ್ಯಾಬ್ಯಾಸಕ್ಕೆ ಕುಲಿತುಕೂಳ್ಳಬೇಕು. ಹೀಗೆ ಅದ್ಯಯನ ಆರಂಭಿಸುವ ಮೊದಲು, ಮೇಲೆ ತಿಳಿಸಲಾದ ಪುಟ್ಟ ಶ್ಲೋಕವನ್ನು ಭಕ್ತಿಯಿಂದ ಎರಡೂ ಕೈಮುಗಿದು ಹೇಳಿಕೊಂಡರೆ ಓದಿದ್ದೆಲ್ಲ ಮನಸ್ಸಿಗೆ ನಾಟುತ್ತದೆ ಎಂಬ ಪ್ರತೀತಿ. ನಿಜ ಇದು ನಮ್ಮ ಸಂಸೃತಿ. ಈ ಪುಟ್ಟ ಶ್ಲೋಕ ಹೇಳುವುದಕ್ಕೆ ಹೆಚ್ಚು ಸಮಯವೇನೂ ಬೇಡ, ಒಂದೇ ನಿಮಿಷ ಸಾಕು . ಆದರೆ ಈ ಶ್ಲೋಕವನ್ನು ಕಲಿಯುವುದರಿಂದ ಭಾಷೆ ಶುದ್ದವಾಗುತ್ತದೆ , ಮನಸ್ಸು ಖಂಡಿತವಾಗಿಯೂ ಪ್ರಫುಲ್ಲಿತವಾಗುತ್ತದೆ.